ಮುದುಕನ ಮದುವೆ ನಾಟಕ ಪ್ರದರ್ಶನ ರಕ್ತದಾನಿ,ರಂಗಭೂಮಿ ಕಲಾವಿದರಿಗೆ ಸನ್ಮಾನ

ನಂದಿನಿ ಮೈಸೂರು

ಮುದುಕನ ಮದುವೆ ನಾಟಕ ಪ್ರದರ್ಶನ
ರಕ್ತದಾನಿ,ರಂಗಭೂಮಿ ಕಲಾವಿದರಿಗೆ ಸನ್ಮಾನ

ಮೈಸೂರು: ದಿ.ಪಿ.ಬಿ.ರೈ ಬೆಳ್ಳಾರೆ ಅವರ ಸವಿ ನೆನಪಿನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದೊಂದಿಗೆ, ಮಂಗಳೂರಿನ ಶ್ರೀ ನಂದಿ ಕೇಶ್ವರ ನಾಟಕ ಸಂಘದ ೪೧ನೇ ವರ್ಷದ ಸಂಭ್ರ ಮದ ಅಂಗವಾಗಿ ಇಲ್ಲಿನ ಪುರಭವನದ ಆವರಣದಲ್ಲಿ ಗುರುವಾರ ‘ಮುದುಕನ ಮದುವೆ’ ಹಾಸ್ಯಮಯ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ದಿ.ಪಿ.ಬಿ.ದುತ್ತರಗಿ ವಿರಚಿತ ಈ ನಾಟಕವನ್ನು ತಂಡದ ಬಿ.ಮಲ್ಲಿಕಾರ್ಜುನ(ಹೊಸದುರ್ಗ), ಯಶಸ್ವಿನಿ ಲೋಕೇಶ್ವರ(ಮಂಡ್ಯ), ಶರತ್ ತಾಲೂರು(ಬಳ್ಳಾರಿ), ಜಯರಾಮ್ (ಮಂಡ್ಯ), ಮಂಗಳೂರು ಮೀನನಾಥ್ (ರಾಘವೇಂದ್ರ ರೈ), ಮಹೇಶ್ವರಿ ಗಣೇಶ್(ಬೆಂಗಳೂರು), ಚೈತ್ರ(ಮೈಸೂರು),ಹೆಲನ್(ಮೈಸೂರು) ಮತ್ತು ಶೋಭಾ ರೈ(ಮಂಗಳೂರು) ಕಲಾವಿದರು ಒಗ್ಗೂಡಿ ಉತ್ತಮ ಪ್ರದರ್ಶನ ನೀಡಿದರು.
ಹಿರಿಯ ಕಲಾವಿದರಾದ ರಾಮೇಗೌಡ್ರು ಅವರು ಪ್ರದರ್ಶವನ್ನು ಉದ್ಘಾಟಿಸಿದರು. ಸಭಾ ಕಾರ್ಯ ಕ್ರಮದಲ್ಲಿ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿ ತಾಧಿಕಾರಿ ಎನ್.ಶ್ರೀನಿವಾಸನ್, ಶಾಸಕ ಟಿ.ಎಸ್,ಶ್ರೀವತ್ಸ, ನಾಟಕ ರಚನೆಕಾರರಾದ ಎಸ್.ಎಸ್.ಪುಟ್ಟೇಗೌಡ್ರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ರಕ್ತದಾನಿ, ಸಮಾಜ ಸೇವಕ, ರಂಗಭೂಮಿ ಕಲಾವಿದರಾದ ಮಂಜು.ವಿ.ಅವರನ್ನು ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅಭಿನಂದಿಸಿ, ಗೌರವಿಸಿ ಸನ್ಮಾನಿಸಿದರು.
ನಾಟಕ ಪ್ರದರ್ಶನಕ

Leave a Reply

Your email address will not be published. Required fields are marked *