ನಂದಿನಿ ಮನುಪ್ರಸಾದ್ ನಾಯಕ್
ವೃಕ್ಷ ಸಂಸ್ಥೆ ಸಹಯೋಗದಲ್ಲಿ ನಾ.ರತ್ನ ರವರ ಸವಿನೆನಪಿಗಾಗಿ ಪಿನಾಕ ಪ್ರಸ್ತುತ ಪಡಿಸಿದ ಸೂತ್ರದ ಗೊಂಬೆ ರಾಜಸ್ಥಾನಿ ಜಾನಪದ ಕಥರ ಆಧಾರಿತ ನಾಟಕ ಎಲ್ಲರ ಗಮನ ಸೆಳೆಯಿತು.
ಮೈಸೂರಿನ ಸುಯೋಗ್ ಆಸ್ಪತ್ರೆ ಹಿಂಭಾಗವಿರುವ ರಮಾಗೋವಿಂದ ರಂಗ ಮಂದಿರದಲ್ಲಿ ಹಿರಿಯ ರಂಗ ನಿರ್ದೇಶಕ ಎಚ್.ಎಸ್.ಮೇಶ್,ಮೈಸೂರು ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ.ನಿಂಗರಾಜೇಗೌಡ,ಚಲನಚಿತ್ರ ನಟಿ ಇಂದಿರಾ ನಾಯರ್,ಖ್ಯಾತ ಉದ್ಯಮಿ ಡಾ.ಧರ್ಮ ಪ್ರಸಾದ್ ಸೇರಿದಂತೆ ಗಣ್ಯರು ನಾಟಕಕ್ಕೆ ಚಾಲನೆ ನೀಡಿದರು.
ವಿನೋದ ರಂಗರವರ ವಿನ್ಯಾಸ, ಪರಿಕಲ್ಪನೆ, ನಿರ್ದೇಶನದ ಸೂತ್ರದ ಗೊಂಬೆ ನಾಟಕ ಚೊಚ್ಚಲ ನಾಟಕವಾಗಿದ್ದು ಎಲ್ಲರ ಕಣ್ಮನ ಸೆಳೆಯಿತು.ಹೆಣ್ಣು ಮಕ್ಕಳನ್ನ ಕಡೆಗಣಿಸುತ್ತಾ ಹೋದರೇ ಕೊನೆಗೆ ಹೆಣ್ಣು ಸಿಗದಾಂತಾಗುತ್ತದೆ.
ಒಬ್ಬ ಮನುಷ್ಯನ ರೋಗ ಚಿಕಿತ್ಸೆ ಯಿಂದ ಮಾತ್ರ ಗುಣಮುಖವಾಗುವುದಿಲ್ಲ ಜೊತೆಗಿರುವವರ ಪ್ರೀತಿ ಕೂಡ ಮುಖ್ಯವಾಗಿರುತ್ತದೆ ಎಂದು ಈ ನಾಟಕದಲ್ಲಿ ಪ್ರದರ್ಶಿಸಲಾಯಿತು.ಸೂತ್ರದ ಗೊಂಬೆಗಳ ಮನಸ್ಸಿನ ಮಾತು ಗಳು ನೆರೆದಿದ್ದವರ ಚಪ್ಪಾಳೆ ಗಿಟ್ಟಿಸುವಂತೆ ಮಾಡಿತ್ತು.
ಇದೆ ಸಂದರ್ಭದಲ್ಲಿ ವೃಕ್ಷ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಪಿ.ಶಾಂತಕುಮಾರ್,ಪಿನಾಕ ಥಿಯೇಟರ್ ಮುಖ್ಯಸ್ಥ ಹೇಮಂತ ಎಸ್ ಸೇರಿದಂತೆ ನಾಟಕ ಪ್ರೀಯರು ಭಾಗಿಯಾಗಿದ್ದರು.