ನಂದಿನಿ ಮನುಪ್ರಸಾದ್ ನಾಯಕ್
ಆರ್ ಸಿ ಬಿ ಗೆಲುವು: ಅಭಿಮಾನಿಗಳಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ವಿತರಣೆ
ಮೈಸೂರು: ಐಪಿಎಲ್ ಫೈನಲ್ ಪಂದ್ಯಾವಳಿ ಪಂಜಾಬ್ ತಂಡವನ್ನು ಬಗ್ಗು ಬಡಿದು ಕಪ್ಪು ಮೂಡುಗೇರಿಸಿಕೊಂಡ ಆರ್ ಸಿ ಬಿ ಸತತ 18 ವರ್ಷದ ಕೋಟ್ಯಾಂತರ ಕನ್ನಡಿಗರ ಕನಸನ್ನು ನೆನೆಸು ಮಾಡಿದ ಆರ್ ಸಿ ಬಿ ತಂಡ ಹಿನ್ನೆಲೆಯಲ್ಲಿ ಕ್ರಿಕೆಟ್ ಹಬ್ಬ ಹಬ್ಬ ಎಂದು ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ರವರ ನೇತೃತ್ವದಲ್ಲಿ ಮೈಸೂರು ನಗರದ 11 ಇಂದಿರಾ ಕ್ಯಾಂಟೀನ್ ನಲ್ಲಿ
ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟವನ್ನು ನೀಡುವ ಮೂಲಕ ಕ್ರಿಕೆಟ್ ಹಬ್ಬದಂತೆ ಸಡಗರದಿಂದ ಆಚರಿಸಿದರು, ಕೆ ಆರ್ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ
ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡ ಪ್ರಶಸ್ತಿ ಗೆದ್ದಿಲ್ಲ ಈ ವನವಾಸ ಇಂದಿಗೆ ಮುಕ್ತಾಯವಾಗಿದೆ ವಿರಾಟ್ ಕೊಹ್ಲಿ ಅವರು ಆರ್ ಸಿ ಬಿ ತಂಡವನ್ನು 18 ವರ್ಷಗಳಿಂದ ಪ್ರತಿನಿಧಿಸಿದರು ಇಡೀ ವಿಶ್ವದಲ್ಲಿ ನಮ್ಮ ತಂಡಕ್ಕೆ ಇರುವ ಫ್ಯಾನ್ಸ್ ಯಾವ ತಂಡಕ್ಕೂ ಇಲ್ಲ ಎಂದರು,
ಆರ್ ಸಿ ಬಿ ತಂಡವು ಇಡೀ ವಿಶ್ವವೇ ಮೆಚ್ಚುವಂತಹ ಗೆಲುವು ಸಾಧಿಸಿದೆ, ಇಂತಹ ಗೆಲುವು ಪಡೆಯಲು ನಾವು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು, ತಂಡ ಗೆದ್ದಿರುವ ಕಾರಣದಿಂದ ಇಂದು ಮೈಸೂರು ನಗರದ ಎಲ್ಲಾ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟದ ಮೂಲಕ ಹಬ್ಬದಂತೆ ಸಂಭ್ರಮಿಸುತ್ತೇವೆ
ಎಂದು ಹೇಳಿದರು
ಕುರುಬರ ಸಂಘದ ಅಂಗಾಮಿ ರಾಜ್ಯ ಅಧ್ಯಕ್ಷರಾದ ಸುಬ್ರಹ್ಮಣ್ಯ (ಸುಬ್ಬಣ್ಣ), ಸಮಾಜ ಸೇವಕಿ ಖುಷಿ ವಿನು, ಗೌರಿಶಂಕರ್ ನಗರದ ಶಿವಕುಮಾರ್, ಎಸ್ ಎನ್ ರಾಜೇಶ್, ಮೈಸೂರು ಬಸವಣ್ಣ, ಸುನಿ, ಕನಕ ಮೂರ್ತಿ, ಹಾಗೂ ಇನ್ನಿತರರು ಹಾಜರಿದ್ದರು