ಸಿ.ನರೇಂದ್ರಸ್ವಾಮಿ ಹುಟ್ಟು ಹಬ್ಬ ಹಿನ್ನಲೆ ಕೆ.ಆರ್.ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ನಂದಿನಿ ಮನುಪ್ರಸಾದ್ ನಾಯಕ್

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅರ್ಥ ಪೂರ್ಣವಾಗಿ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ
ಸಿ.ನರೇಂದ್ರಸ್ವಾಮಿ ಅವರ ಹುಟ್ಟು ಹಬ್ಬ ಆಚರಿಸಲಾಯಿತು.


ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ,ಕರುನಾಡ ಲಾರಿ ಚಾಲಕರ ಪರಿಷತ್ ನ ಸದ್ಯಸ್ಯರು ಅಭಿಮಾನಿಗಳು ಕೆ.ಆರ್.ಆಸ್ಪತ್ರೆಗೆ ಆಗಮಿಸಿ ಸುಮಾರು 100 ರೋಗಿಗಳಿಗೆ ಸೇಬು,ಮೊಸಂಬಿ,ದಾಳಿಂಬಿ,ಬಾಳೆಹಣ್ಣು ನೀಡಿ ಸಿ.ನರೇಂದ್ರಸ್ವಾಮಿ ಹುಟ್ಟು ಹಬ್ಬವನ್ನ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಮಂಜುಳರವರು ಮಾತನಾಡಿ
ಸಿ‌ ನರೇಂದ್ರಸ್ವಾಮಿರವರ ಹುಟ್ಟು ಹಬ್ಬದ ಹಿನ್ನೆಲೆ ಕೆ.ಆರ್.ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ್ದೇವೆ. ಚಾಮುಂಡೇಶ್ವರಿ ಆಶೀರ್ವಾದ ಇವರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಮುಂದಿನ ದಿನಗಳಲ್ಲಿ ರಾಜಕೀಯ ಜೀವನ ಉಜ್ವಲವಾಗಿರಲಿ ಎಂದು ಶುಭ ಕೋರಿದ್ದೇವೆ ಎಂದರು.

ಎಂದರು ಬಾಳೆಹಣ್ಣು ಮೋಸಂಬಿ ಸೇಬು ದಾಳಿಂಬೆ ಸುಮಾರು ನೂರು ಜನರಿಗೆ ವಿತರಣೆ ಮಾಡಲಾಯಿತು ಲೋಕೇಶ್

ಕರುನಾಡ ಲಾರಿ ಚಾಲಕರ ಪರಿಷತ್ ಅಧ್ಯಕ್ಷ ಕಂಬ್ರಹಳ್ಳಿ ಲೋಕೇಶ್ ಮಾತನಾಡಿ
ಮಲ್ಲಿಕಾರ್ಜುನ ಖರ್ಗೆ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ,ನಾಗವಾಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಿ.ನರೇಂದ್ರಸ್ವಾಮಿರವರ ಹುಟ್ಟು ಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಆಚರಿಸಲಾಗಿದೆ . ಲಾರಿ ದೊಡ್ಡ ಸ್ವಾಮಿ , ನಾಗರಾಜ್ ,ವಿಷಕಂಠ ನಾಯಜ, ಮಂಜುನಾಥ್ ಸೇರಿದಂತೆ ಅಭಿಮಾನಿಗಳ ನೇತೃತ್ವದಲ್ಲಿ ಹುಟ್ಟು ಹಬ್ಬ ಆಚರಿಸಲಾಗಿದೆ ಎಂದರು.

Leave a Reply

Your email address will not be published. Required fields are marked *