ನಂದಿನಿ ಮೈಸೂರು
ಜಿಎಸ್ಟಿ ಜಿನಿ ಎಕ್ಸ್ಪೋ: ವ್ಯಾಪಾರ ಸಂಸ್ಥೆಗಳಿಗೆ ಜಿಎಸ್ಟಿ ಜ್ಞಾನ ಮತ್ತು ಅನುಸರಣೆ ಉತ್ತೇಜನೆ
ರಾಮ್ ಪಠಾಂಗೆ & ಕೋ. ವತಿಯಿಂದ ಜಿಎಸ್ಟಿ ಜಿನಿ ಎಕ್ಸ್ಪೋ ಆಯೋಜನೆಯಾಗುತ್ತಿದ್ದು, ಇದು ವ್ಯಾಪಾರ ಸಂಸ್ಥೆಗಳಿಗೆ ಜಿಎಸ್ಟಿ ಸಂಬಂಧಿತ ಪ್ರಮುಖ ನಿಯಮಗಳನ್ನು ಅರ್ಥೈಸಿ, ಉತ್ತಮ ಅನುಸರಣೆ ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ನಿಗದಿತ ಜಿಎಸ್ಟಿ ನಿಯಮಗಳ ಬಗ್ಗೆ ಉಚಿತ ಮಾಹಿತಿ ನೀಡಲಾಗುವುದು ಮತ್ತು ರಾಮ್ ಪಠಾಂಗೆ & ಕೋ. ತಜ್ಞರಿಂದ ವೈಯಕ್ತಿಕ ಸಲಹಾ ಅಧಿವೇಶನಗಳ ವ್ಯವಸ್ಥೆ ಮಾಡಲಾಗುತ್ತದೆ.
ಈ ಎಕ್ಸ್ಪೋವನ್ನು ಮೈಸೂರು ಜಿಎಸ್ಟಿ ಸಂಯುಕ್ತ ಆಯುಕ್ತೆ ತೇಜಸ್ವಿನಿ ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಲಿಂಗರಾಜು ಉದ್ಘಾಟಿಸಲಿದ್ದಾರೆ.
ಈ ಉದ್ದೇಶದ ಕುರಿತು ಮಾತನಾಡಿದ ರಾಮ್ದಾಸ್ ಟಿ.ಎನ್. (ರಾಮ್ ಪಠಾಂಗೆ & ಕೋ.), “ನಾವು ವ್ಯಾಪಾರ ಸಂಸ್ಥೆಗಳಿಗೆ ಜಿಎಸ್ಟಿ ನಿಯಮಗಳ ಅರ್ಥವನ್ನು ಸ್ಪಷ್ಟವಾಗಿ ತಿಳಿಯಲು ಹಾಗೂ ಅನುಸರಿಸುವಂತೆ ಪ್ರೇರೇಪಿಸುವುದೇ ನಮ್ಮ ಉದ್ದೇಶ. ಈ ಎಕ್ಸ್ಪೋ ಮೂಲಕ ಜಿಎಸ್ಟಿ ಸಂಬಂಧಿತ ದೋಷಗಳು ಮತ್ತು ತೆರಿಗೆ ಅಧಿಕಾರಿಗಳೊಂದಿಗೆ ಉಂಟಾಗುವ ವಿವಾದಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಾಗುವುದು” ಎಂದರು.
ಆದಾಯ ತೆರಿಗೆ (ಇನ್ಕಂ ಟ್ಯಾಕ್ಸ್) ಕುರಿತಂತೆ ಹಲವು ಯಶಸ್ವೀ ಕಾರ್ಯಕ್ರಮಗಳನ್ನು ಆಯೋಜಿಸಿರುವ ರಾಮ್ ಪಠಾಂಗೆ & ಕೋ., ವ್ಯಾಪಾರ ಸಮುದಾಯದಲ್ಲಿ ಆರ್ಥಿಕ ಶಿಕ್ಷಣ ಮತ್ತು ನಿಯಮಾನುಸರಣೆ ಕುರಿತ ಬದ್ಧತೆಯನ್ನು ಮುಂದುವರಿಸುತ್ತಿದೆ.
ಈ ಜಿಎಸ್ಟಿ ಜಿನಿ ಎಕ್ಸ್ಪೋದಲ್ಲಿ ಬಹುತೇಕ ವ್ಯಾಪಾರಿಗಳು, ಲೆಕ್ಕಪರಿಶೋಧಕರು ಹಾಗೂ ವೃತ್ತಿಪರರು ಭಾಗವಹಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮದಲ್ಲಿ ರಾಮ್ ಪಠಾಂಗೆ ಸಂಸ್ಥೆಯ ಸಹ ಸ್ಥಾಪಕ ಟಿ.ಎನ್. ಸುರ್ಯನಾರಾಯಣ ರಾವ್, ಸಿಇಒ ರಾಮ್ ಕೀರ್ತ್ ಟಿ.ಆರ್., ಸಿಒಒ ಶೋಮಿಕಾ ಎಸ್. ರಾವ್, ಜಯಶ್ರೀ ಸಿ.ಆರ್. (ಜಯಶ್ರೀ ಸಿ.ಆರ್. ಅಸೋಸಿಯೇಟ್ಸ್ನ ಮಾಲಕಿ) ಮತ್ತು ಇತರರು ಹಾಜರಿದ್ದರು.