ನಂದಿನಿ ಮೈಸೂರು
ಪ್ರತಿ ಕ್ಷೇತ್ರದಲ್ಲೂ ಬಂಟರ ಸಮುದಾಯ ಪ್ರಗತಿ: ಜಿಟಿಡಿ
ಮೈಸೂರು: ಪ್ರತಿಯೊಂದು ಸಮಾಜವನ್ನು ವಿಶ್ವಾಸಕ್ಕೆ ಪಡೆಯುವ ಜೊತೆಗೆ ಯಾವುದೇ ಊರಿನಲ್ಲಿ ವೃತ್ತಿ ಅರಂಭಿಸಿದರೂ ಸಫಲರಾಗುತ್ತಾರೆ. ಬಂಟರ ಸಮುದಾಯ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಹೊಂದಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ವಿಜಯನಗರ ಬಂಟರ ಸಂಘದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದ ನಾನಾ ಕಡೆಗಳಲ್ಲಿ ನೆಲೆಸಿರುವ ಬಂಟರು ತಮ್ಮ ಆಚಾರಗಳು,ಬದ್ದತೆ ಮೂಲಕ ಗಮನ ಸೆಳೆಯುತ್ತಾರೆ ಎಂದು ನುಡಿದರು.
ಬಂಟರ ಸಮುದಾಯ ಕಡಿಮೆ ಇರಬಹುದು. ಇದಕ್ಕೆಯಾರೂ ಬೇಸರ ಪಟ್ಟಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಪ್ರತಿಯೊಂದು ಕ್ಷೇತ್ರದಲ್ಲಿ ಬಂಟ ಸಮುದಾಯ ತನ್ನದೇ ಛಾಪು ಮೂಡಿಸಿದೆ. ಕೃಷಿ ಹಿನ್ನೆಲೆಯ ಹೊಂದಿರುವ ಬಂಟರ ಸಮುದಾಯವೂ ದೇಶಕ್ಕಾಗಿ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ. ಬ್ಯಾಂಕಿಂಗ್, ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ಕೀರ್ತಿ, ಶಕ್ತಿಯನ್ನು ಹೊಂದಿದೆ. ಧೈರ್ಯ, ದಕ್ಷತೆ, ದೈವಭಕ್ತರಾದ ಸಮುದಾಯ ಬಂಟರು ಎಂದು ಬಣ್ಣಿಸಿದರು.
ಇಂದು ರಮಾನಾಥ ರೈ ಅವರು ಮನ ಬಿಚ್ಚಿ ಮಾತನಾಡಿದ್ದಾರೆ. ನುಡಿದಂತೆ ನಡೆಯುವ ರಾಜಕಾರಣಿ ರಮಾನಾಥ ರೈ. ಸಮುದಾಯಕ್ಕಾಗಿ ಹೆಮ್ಮೆ ತರುವ ಕೆಲಸವನ್ನು ಅವರು ಮಾಡಿದ್ದಾರೆ. ಹೀಗಾಗಿ ಪ್ರಮಾಣಿಕ ಕೆಲಸದಿಂದ ಮುಂದೆ ಶಾಸಕರಾಗಿ ಮಂತ್ರಿಗಳಾಗಬೇಕು ಎಂದರು.
ಪ್ರಭಾಕರ ಶೆಟ್ಟರು ೧೯೮೩ರಿಂದ ಆತ್ಮೀಯ ಸ್ನೇಹಿತರು. ಪ್ರಕಾಶ ಶೆಟ್ಟಿ ಅವರು ಕೂಡ ಆಪ್ತ ಗೆಳೆಯರು. ಶಿಕ್ಷಣ ಕ್ಷೇತ್ರದಲ್ಲಿ ಮೋಹನ್ ಆಳ್ವಾ ಕ್ರಾಂತಿಯನ್ನೆ ಮಾಡಿದ್ದಾರೆ. ಹೀಗಾಗಿ ದೇಶದಲ್ಲಿ ಅವರ ಹೆಸರು ಪ್ರಚಲಿತವಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿರುವುದು ಬಂಟ ಸಮುದಾಯದ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಂಟರ ಸಂಘದ ಸ್ವರ್ಣ ಮಹೋತ್ಸವ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ದೇಶ ಕಾಯುವ ಸೈನಿಕರಿಗೆ ಪ್ರಾರ್ಥಿಸಿ
ಭಾರತ-ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ನಮ್ಮೆಲ್ಲರನ್ನು ಸುರಕ್ಷಿತವಾಗಿ ರಕ್ಷಿಸಿರುವ ನಮ್ಮ ಭಾರತೀಯ ಸೇನೆಯ ಸೈನಿಕರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಜಾತಿ, ಧರ್ಮ, ಪಕ್ಷಗಳನ್ನು ಬಿಟ್ಟು ಸೈನಿಕರ ಒಳಿತಿಗಾಗಿ ಮತ್ತು ಅವರ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು.
– ಜಿ.ಟಿ.ದೇವೇಗೌಡ, ಶಾಸಕ.