ನಂದಿನಿ ಮನುಪ್ರಸಾದ್ ನಾಯಕ್
*ಕೇಂದ್ರ ಸರ್ಕಾರ ಬೆಲೆ ಏರಿಸಿದ್ರೆ ಮೋದಿ ರಾಜೀನಾಮೆ ಕೇಳ್ತೀರಾ? -ಬಿ ಸುಬ್ರಹ್ಮಣ್ಯ*
ಮೈಸೂರು: ರಾಜ್ಯದಲ್ಲಿ ಬೆಲೆ ಏರಿಕೆಯಾದ್ರೆ ಎಲ್ಲದಕ್ಕೂ ಮುಖ್ಯಮಂತ್ರಿಯೇ ಕಾರಣ ಎನ್ನುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಬೆಲೆ ಏರಿಕೆಯಾದ್ರೆ ಮೋದಿ ಕಾರಣ ಎನ್ನುತ್ತೀರಾ? ಮೋದಿ ರಾಜೀನಾಮೆ ಕೇಳ್ತೀರಾ? ಅಂತ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರ ಹಾಲಿನ ದರ ಏರಿಸಿದ್ದಕ್ಕೆ ಬಿಜೆಪಿ ನಾಯಕರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದರು. ಆದ್ರೆ ಅದು ರೈತರಿಗೆ ಸೇರುತ್ತಿದೆ. ಈಗ ಕೇಂದ್ರ ಸರ್ಕಾರ ರೈಲಿನ ಟಿಕೆಟ್ ದರ ಏರಿಕೆ ಮಾಡಲು ಮುಂದಾಗಿದೆ. ಈಗ ಕೇಂದ್ರದ ವಿರುದ್ಧ ಇವರ ನಿಲುವೇನು? ಇಲ್ಲಿ ಸಿದ್ದರಾಮಯ್ಯರ ರಾಜೀನಾಮೆ ಕೇಳುವವರು ಕೇಂದ್ರದಲ್ಲಿ ಮೋದಿ ಅವರ ರಾಜೀನಾಮೆ ಕೇಳ್ತಾರಾ ಅಂತ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು 2ನೇ ಬಾರಿ ಸಿಎಂ ಆಗಿ ಈಗಾಗಲೇ 2 ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ. 569 ಭರವಸೆಗಳಲ್ಲಿ 249 ಭರವಸೆಗಳನ್ನ ಈಡೇರಿಸಿ ಕರ್ನಾಟಕವನ್ನ ಸಮೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ರಸಗೊಬ್ಬರ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿದೆ. ಈಗ ರೈಲಿನ ಟಿಕೆಟ್ ದರ ಕೂಡ ಏರಿಕೆ ಮಾಡುತ್ತಿದೆ ಇದೆಲ್ಲವೂ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕುಟುಕಿದ್ದಾರೆ.
ಮಹಿಳೆಯರಿಗೆ 5 ಕೋಟಿ ರೂವರೆಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡುತ್ತೇವೆ. ಇದರಿಂದ ಗ್ರಾಮೀಣ ಮಹಿಳೆಯರಿಗೆ ಅನುಕೂಲ ಆಗಲಿದೆ ಅಂದ್ರು. ಆದ್ರೆ ಬ್ಯಾಂಕಿನಲ್ಲಿ ನೂರೆಂಟು ಕಂಡೀಷನ್ ಹೇಳ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕೆಲವರು ಉಳಿತಾಯ ಮಾಡುವುದೇ ಕಷ್ಟ ಅಂತಹದ್ದರಲ್ಲಿ ಆದಾಯ ತೆರಿಗೆ ಕಟ್ಟಬೇಕು ಅಂತಾರೆ, ಐಟಿ ರಿಟರ್ನ್ಸ್ ಕೇಳ್ತಾರೆ, ಅವರೆಲ್ಲ ಎಲ್ಲಿಂದ ತರಬೇಕು?
ಈಗ ಟೋಲ್ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಇದು ನಿಯಮಿತ ಪ್ರಯಾಣಿಕರಾಗಿದ್ದವರಿಗೆ ಮಾತ್ರ ಅನುಕೂಲವಾಗುತ್ತದೆ. ಆದ್ರೆ ಗೂಡ್ಸ್, ಟ್ರಾನ್ಸ್ಪೋರ್ಟ್ಗೆ ಹೇಗೆ ಉಳಿತಾಯ ಆಗುತ್ತೆ? ಒಂದು ಟೋಲ್ ಪಾಸ್ಗೆ 1 ವರ್ಷ ಅಥವಾ 200 ಟ್ರಿಪ್ ಅಂದಿದ್ದಾರೆ. ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ವೇ ನಲ್ಲಿ 2 ಟೋಲ್ ಇದೆ. ಒಮ್ಮೆ ಹೋಗಿ ಬಂದ್ರೆ 4 ಟ್ರಿಪ್ ಮುಗಿದೇ ಹೋಗುತ್ತೆ. ಇದು ವಾರ್ಷಿಕ ಪಾಸ್ ಹೇಗಾಗುತ್ತೆ? ರಾಜ್ಯದಲ್ಲಿರುವ ಬಿಜೆಪಿ ನಾಯಕರು ಹಾಗೂ ರಾಜ್ಯದಿಂದ ಕೇಂದ್ರಕ್ಕೆ ಆಯ್ಕೆಯಾದವರು ಮೊದಲು ಈ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಬೆಳೆಸಿಕೊಳ್ಳಲಿ ಎಂದು ತಿವಿದಿದ್ದಾರೆ.
ಬಿ ಸುಬ್ರಹ್ಮಣ್ಯ
ಮಾಜಿ ಅಧ್ಯಕ್ಷರು
ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು
9845394933