ಆಯುಬ್ ಖಾನ್  ಅವರಿಂದ ವಸ್ತು ಪ್ರದರ್ಶನ ಪ್ರಾಧಿಕಾರ   ರಾಷ್ಟ್ರಮಟ್ಟ  ಮನ್ನಣೆ ಪಡೆದಿದೆ. ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಶ್ಲಾಘನೆ

ನಂದಿನಿ ಮೈಸೂರು

ಆಯುಬ್ ಖಾನ್  ಅವರಿಂದ ವಸ್ತು ಪ್ರದರ್ಶನ ಪ್ರಾಧಿಕಾರ   ರಾಷ್ಟ್ರಮಟ್ಟ  ಮನ್ನಣೆ ಪಡೆದಿದೆ.
– ಅರಣ್ಯ ಮಂತ್ರಿ ಈಶ್ವರ ಖಂಡ್ರೆ   ಶ್ಲಾಘನೆ .
 ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಉಪ ಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಆಯುಬ್ ಖಾನ್ ಅವರಿಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು….
 ಸಚಿವರಾದ ಈಶ್ವರ್  ಖಂಡ್ರೆ ಮಾತನಾಡಿ ಆಯುಬ್ ಖಾನ್ ಅವರು ಮೇಯರ್ ಆಗಿ, ಉಪಮೇಯರಾಗಿ, ಕಾರ್ಪೊರೇಟರ್ ಆಗಿ ವಿವಿಧ ಹಂತಗಳಲ್ಲಿ ಸಾರ್ವಜನಿಕವಾಗಿ ಅಪಾರವಾದ ಸೇವೆಯನ್ನು ಮಾಡಿದ್ದಾರೆ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಅವರು ಅಧ್ಯಕ್ಷರಾದ ನಂತರ ಪ್ರಾಧಿಕಾರಕ್ಕೆ ಹೊಸ ಸ್ಪರ್ಶವನ್ನು ಕೊಡುವುದರಲ್ಲಿ ಸಫಲರಾಗಿದ್ದಾರೆ, ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಎಂದು ಹೇಳಿದರು. ಕಳೆದ ಎರಡು ವರ್ಷಗಳಲ್ಲಿ ದಸರಾದಲ್ಲಿ ಭಾಗವಹಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿ ಅಯುಬ್ ಖಾನ್ ಮತ್ತು ಅವರ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಅವಿರತವಾಗಿ ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲ ಅಪಾರವಾದ ಗೌರವವಿದೆ ಎಂದು ಹೇಳಿದರು. 
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ ಜೆ ವಿಜಯ್ ಕುಮಾರ್ ಮಾತನಾಡಿ ಅಯುಬ್ ಖಾನ್ ಅವರು ಮೈಸೂರಿನ ಮೇಯರ್ ಆಗಿದ್ದಾಗ ಹಲವಾರು ಹೊಸ ಯೋಜನೆಗಳನ್ನು ಮೈಸೂರಿಗೆ ಪರಿಚಯಿಸಿದರು. ಕೇಂದ್ರ ಸರ್ಕಾರದ ಜೆಎನ್ ನರ್ಮ್ ಯೋಜನೆ ಅಡಿ ಸುಮಾರು ಒಂದುವರೆ ಸಾವಿರ ಕೋಟಿ ರೂಪಾಯಿಗಳನ್ನು ಮೈಸೂರು ಕಾರ್ಪೊರೇಷನ್ ಗೆ ತಂದ ಕೀರ್ತ ಅವರಿಗೆ ಸಲ್ಲುತ್ತದೆ ಎಂದರು. ಕರೋನಾದ ಸಂಕಷ್ಟದ ಸಮಯದಲ್ಲಿ ತಮ್ಮ ಸ್ವಂತ ಹಣದಿಂದ ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಪಕ್ಷದಲ್ಲಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಸುಮಾರು 300ಕ್ಕೂ ಹೆಚ್ಚಿನ ಕಾರ್ಯಕರ್ತರಿಗೆ ದಸರಾ ವಸ್ತು ಪ್ರದರ್ಶನ ಉಪ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿದ ಹೆಗ್ಗಳಿಕೆ ಆಯುಬ್ ಖಾನ್ ಅವರಿಗೆ ಸಲ್ಲುತ್ತದೆ ಎಂದರು. ಇದೇ ಸಮಯದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯುಬ್ ಖಾನ್ ಅವರಿಗೆ “ಟ್ರೂ ಕಾಂಗ್ರೆಸ್ ಮ್ಯಾನ್” ಎಂಬ ಬಿರುದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪದಾಧಿಕಾರದ ಅಧ್ಯಕ್ಷರಾದ ಆಯುಬ್ ಖಾನ್, ಮಾಜಿ ಮೇಯರ್ಗಳಾದ ಪುಷ್ಪಲತಾ ಚಿಕ್ಕಣ್ಣ, ಮೂದಾಮುಣಿ, ಮಾಜಿ ಕಾರ್ಪೊರೇಟರ್ ಗಳಾದ ಕೆ ವಿ ಮಲ್ಲೇಶ್, ಶೌಕತ್ ಅಲಿ, ನಗರದ ಎಸ್ಸಿ ಘಟಕದ ಅಧ್ಯಕ್ಷರಾದ ರಮೇಶ್, ಓಬಿಸಿ ಘಟಕದ ಅಧ್ಯಕ್ಷರಾದ ನಾಗೇಶ್, ದಸರಾ ವಸ್ತುಪ್ರದರ್ಶನ ಉಪ ಸಮಿತಿ ಅಧ್ಯಕ್ಷರಾದ ರಘುರಾಜ ಅರಸ್,  ಕೈಸೇರ್, ಡೈರಿ ವೆಂಕಟೇಶ್,ಸ್ವಚ್ಛತಾ ಉಪ ಸಮಿತಿಯ ಅಧ್ಯಕ್ಷರಾದ ಪ್ರಸನ್ನ ಅಪ್ಪು, ಸದಸ್ಯರಾದ ಪ್ರವೀಣ್ ತೇಜ, ರಾಕೇಶ್ ಡಿಸಿಸಿ ಪದಾಧಿಕಾರಿಗಳಾದ ಸಂತೋಷ್ ಮೊಳೆಯೂರು ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *